This website is a showcase for the articles, campaigns and discussion related to rational and ethical ways in medicine and health care. Take Part in the Discussion, or leave us a word. You too can participate.

ಆರೋಗ್ಯವೇ ಭಾಗ್ಯ ಎನ್ನುವ ಮಾತು ಸಾರ್ವಕಾಲಿಕವಾದ ಸತ್ಯ. ಆರೋಗ್ಯ ಯಾರಿಗೆ ಬೇಡ? ಈ ಜಾಗತೀಕರಣದ ಯುಗದಲ್ಲಿ ನಾವು ದಿನ ನಿತ್ಯ ಬಳಸುವ ನೀರು, ಉಪ್ಪು, ಧಾನ್ಯಗಳು, ಹಣ್ಣು-ತರಕಾರಿಗಳು ಇತ್ಯಾದಿ 'ಅವಶ್ಯಕ ವಸ್ತು'ಗಳಂತೆಯೇ, 'ಆರೋಗ್ಯ ಸೇವೆ'ಯೂ ಬೃಹತ್ ಉದ್ದಿಮೆದಾರರ ಹೂಡಿಕೆಗೊಂದು ರಂಗವಾಗಿಬಿಟ್ಟಿದೆ. ಆರೋಗ್ಯ ರಕ್ಷಣೆಯು ವ್ಯಾಪಾರವಾದಂತೆ, ವೈದ್ಯಕೀಯ ಶಿಕ್ಷಣವೂ ಖಾಸಗೀಕರಣಗೊಂಡು ಮೌಲ್ಯಗಳು ಶಿಥಿಲಗೊಳ್ಳುತ್ತಿವೆ. ಒಪ್ಪೊತ್ತು ಊಟವನ್ನೂ ಸರಿಯಾಗಿ ಮಾಡಲಾರದ ಕೋಟಿಗಟ್ಟಲೆ ಭಾರತೀಯರ ಮತಗಳನ್ನು ಪಡೆದು ಅಧಿಕಾರಗ್ರಹಣ ಮಾಡಿರುವ ಸರಕಾರಗಳು, ಜನರಿಗೆ ಮೂಲಭೂತ ಆರೋಗ್ಯಸೇವೆಯನ್ನು ಒದಗಿಸುವ ಜವಾಬ್ದಾರಿಯನ್ನು ನಿಭಾಯಿಸುವ ಬದಲು, ಖಾಸಗಿ ರಂಗದ 'ಆಸ್ಪತ್ರೆ ಉದ್ದಿಮೆಗಳಿಗೆ' ಬೇಕಾದೆಲ್ಲವನ್ನೂ ನೀಡಿ, 'ವೈದ್ಯಕೀಯ ಪ್ರವಾಸೋದ್ಯಮ'ದ ಡಂಗುರ ಬಾರಿಸುತ್ತಾ ಅತುಲ್ಯ ಭಾರತದ ಕನಸನ್ನು ತೋರಿಸುವಲ್ಲಿ ನಿರತವಾಗಿವೆ.

ಆರೋಗ್ಯವನ್ನು ಕೆಡಿಸಿ (ಸಂಸ್ಕರಿತ, ತ್ಯಾಜ್ಯ ಆಹಾರಗಳು, ಪರಿಸರ ಮಾಲಿನ್ಯ, ಕೀಟನಾಶಕಗಳು ಇತ್ಯಾದಿಗಳಿಂದ), ಇಲ್ಲದ ರೋಗಗಳನ್ನು ಸೃಷ್ಟಿಸಿ (ಕೊಲೆಸ್ಟರಾಲ್ ಇತ್ಯಾದಿ), ಈ 'ರೋಗಗಳ' ಚಿಕಿತ್ಸೆಗೆ ಬೇಕಾದ ಔಷಧಗಳನ್ನೂ, ಇತರ ವ್ಯವಸ್ಥೆಗಳನ್ನೂ ನಿರ್ಮಿಸಿ ಅಮಾಯಕ ಜನಸಾಮಾನ್ಯರ ಆರೋಗ್ಯ, ಮನಃಶ್ಶಾಂತಿ ಮತ್ತು ಹಣಗಳೆಲ್ಲವನ್ನೂ ಹಾಳುಗೆಡವುತ್ತಿರುವ ಇಂದಿನ ಸನ್ನಿವೇಶದಲ್ಲಿ ಆರೋಗ್ಯರಕ್ಷಣೆಯ ಹಾಗೂ ಆರೋಗ್ಯಸೇವೆಯ ಒಳ-ಹೊರಗುಗಳ ಬಗ್ಗೆ ಅರಿವನ್ನು ಮೂಡಿಸುವ ಕಿರುಪ್ರಯತ್ನವಿದು. ಸ್ವತಂತ್ರ ಚಿಂತನೆಯ ಕೆಲಮಂದಿ ವೈದ್ಯರ ಈ ಉಪಕ್ರಮದಲ್ಲಿ ಭಾಗಿಗಳಾಗಲು ನಿಮಗಿದೋ ಸ್ವಾಗತ!

ಚರ್ಚೆಗಳಲ್ಲಿ ಪಾಲ್ಗೊಳ್ಳಿ, ಅಥವಾ ನಮಗೆ ಬರೆಯಿರಿ. ನೀವೂ ಭಾಗಿಗಳಾಗಿ.

ಪಶು ಹಾಲಿನ ಪಾನ: ತಾಯ್ತನಕ್ಕೆ ಅಪಮಾನ, ರೋಗಗಳಿಗೆ ಆಹ್ವಾನ

ಹಾಲಿನ ಬಗ್ಗೆ ಕೆಟ್ಟದ್ದನ್ನು ಹೇಳಿದರೆ ಒಪ್ಪುವವರ ಸಂಖ್ಯೆಯು ಅತಿ ವಿರಳ. ಮನುಷ್ಯನ ಜೀವನದೊಂದಿಗೆ ಬಹಳ ಭಾವನಾತ್ಮಕವಾಗಿ ಬೆರೆತಿರುವ 'ಆಹಾರ'ವೆಂದರೆ ಹಾಲು. ಹುಟ್ಟಿದ ಘಳಿಗೆಯಿಂದ ಕೊನೆಯ ತನಕ ಮನುಷ್ಯನು ಸೇವಿಸುವ 'ಆಹಾರ'ವೊಂದಿದ್ದರೆ ಅದು ಹಾಲೇ ಅಲ್ಲವೆ? ಶತ-ಶತಮಾನಗಳಿಂದ ಮನುಷ್ಯನು ಕುಡಿಯುತ್ತಿರುವ ಈ ಹಾಲು ಅಮೃತವಲ್ಲವೇ?

ಹೌದೆ?

ಮಕ್ಕಳಲ್ಲಿ ಗ್ಯಾಸ್ಟ್ರಿಕ್ ತೊಂದರೆ ಮತ್ತದಕ್ಕೆ ಹೊಸಾ ಔಷಧ!

ಕೆಲದಿನಗಳ ಹಿಂದೆ ಹಿರಿಯರೊಬ್ಬರನ್ನು ಆಸ್ಪತ್ರೆಯಲ್ಲಿ ದಾಖಲಿಸಿದ್ದೆ. ಮರುದಿನ ಅವರನ್ನು ನೋಡಲೆಂದು ಹೋಗಿದ್ದಾಗ ಅವರ ಕೊಠಡಿಯ ಹೊರಗೆ ನಿಂತಿದ್ದ ಸುಮಾರು ಎರಡು ವರ್ಷದ ಮಗುವೊಂದು ಪೊಟ್ಟಣವೊಂದರಿಂದ ಕುರುಂಕುರುಂ ತಿಂಡಿಯನ್ನು ಬಾಯಿಯೊಳಗೆ ತುರುಕಿಕೊಂಡು ತಿನ್ನುತ್ತಿದ್ದುದನ್ನು ನೋಡಿದೆ. ನಾನು ಒಳಹೊಕ್ಕಾಗ ಆ ಮಗುವೂ ನನ್ನ ಹಿಂದೆಯೇ ಬಂದಳು. ನಾನು ರೋಗಿಯನ್ನು ಪರೀಕ್ಷಿಸಿ ಇನ್ನೇನು ಹೊರ ನಡೆಯುವುದರಲ್ಲಿದ್ದಾಗ ಅಲ್ಲೇ ಇದ್ದ ಮೇಜಿನ ಮೇಲೆ ಅಂಟಾಸಿಡ್ ನ ಬಾಟಲಿಯೊಂದು ನನ್ನ ಕಣ್ಣಿಗೆ ಬಿತ್ತು. ನಾನು ಇದನ್ನು ಬರೆದೇ ಇಲ್ಲವಲ್ಲ, ಇದೇಕೆ ಇಲ್ಲಿದೆ ಅಂತ ದಾದಿಯಲ್ಲಿ ವಿಚಾರಿಸಿದೆ.
“ಇಲ್ಲ, ಅದು ಅವರದ್ದಲ್ಲ, ನನ್ನ ಮಗುವಿಗೆ ಮಕ್ಕಳ ವೈದ್ಯರು ಬರೆದು ಕೊಟ್ಟದ್ದು” ಅಂದಳು ನನ್ನ ರೋಗಿಯ ಮಗಳು.
“ಯಾಕೆ” ಅಂದೆ.

Are We Prescribing Only What Is Needed?

Modern medicine has undergone a sea change. This change is just not limited to newer diagnostic aids, newer drugs, newer approaches to treatment modalities but also invaded the prescription which have become voluminous in terms of number of drugs advised. Are they subject to some form of scrutiny? It is not that all of them are illogical or they do not have scientific literature to back their claim, but do we need drugs with marginal benefits? There is real situation wherein patients tend to consume this at the expense of core drugs. This becomes an important issue in a country like ours where resource based medicine takes precedence. My objective would be served if it provokes thinking on these lines.

ಲಕ್ಷಗಟ್ಟಲೆ ಕೊಟ್ಟು ವೈದ್ಯಕೀಯ ಕಾಲೇಜು ಸೇರುವುದೇಕೆ?

ಕರ್ನಾಟಕದಲ್ಲೀಗ ೩೬ ವೈದ್ಯಕೀಯ ಕಾಲೇಜುಗಳಿವೆ, ಇನ್ನೂ ಕೆಲವು ಮುಂದಕ್ಕೆ ಬರಬಹುದು. ಲಕ್ಷಗಟ್ಟಲೆ ತೆತ್ತು ತಮ್ಮ ಮಕ್ಕಳನ್ನು ಈ ಕಾಲೇಜುಗಳಲ್ಲಿ ಸೇರಿಸುವ ಹೆತ್ತವರ ಸಂಖ್ಯೆಯೂ ಸಾಕಷ್ಟಿದೆ. ಎಂಬಿಬಿಎಸ್ ಆದ ನಂತರ ಎಂಡಿ/ಎಂಎಸ್, ಅದರ ನಂತರ ಡಿಎಂ/ಎಂಸಿಎಚ್ - ಹೀಗೆ ಇವೆಲ್ಲವಕ್ಕೂ ಮತ್ತಷ್ಟು ಲಕ್ಷಗಳನ್ನು ಸುರಿದು ಸೀಟು ದಕ್ಕಿಸಿಕೊಳ್ಳುವವರೂ ಬಹಳಷ್ಟಿದ್ದಾರೆ. ಇಷ್ಟೊಂದು ಹಣ ತೆತ್ತು ತಮ್ಮ ಮಕ್ಕಳನ್ನು ವೈದ್ಯಕೀಯ ವ್ಯಾಸಂಗಕ್ಕೆ ಸೇರಿಸುವಂತೆ ಹೆತ್ತವರನ್ನು ಪ್ರೇರೇಪಿಸುವ ಕಾರಣಗಳೇನಿರಬಹುದು? ಪ್ರತಿಷ್ಠೆಯೇ? ಗೌರವವೇ? ಹಾಕಿದ ಹಣಕ್ಕೆ ಮೋಸವಿಲ್ಲ ಎಂಬ ಧೈರ್ಯವೇ? ತಮ್ಮ ಮಕ್ಕಳು ಒಳ್ಳೆಯದನ್ನೇ ಕಲಿಯಲಿ ಎಂಬ ಹಂಬಲವೇ?

ಬೆಂಗಳೂರಿನ ಬೀದಿನಾಯಿಗಳು: ಬದುಕುಳಿಸಲು ಖರ್ಚು ಕೋಟಿಗಟ್ಟಲೆ; ಕಚ್ಚಿಸಿಕೊಂಡವರು ಲಕ್ಷಗಟ್ಟಲೆ

ಮಾಹಿತಿ ಕಾಯಿದೆ ೨೦೦೫ರ ಅಡಿಯಲ್ಲಿ ಬೀದಿನಾಯಿಗಳ ಬಗ್ಗೆ ಬೃಹತ್ ಬೆಂಗಳೂರು ಮಹಾನಗರಪಾಲಿಕೆಯಿಂದ ನಾವು ಕೇಳಿದ ಪ್ರಶ್ನೆಗಳಿಗೆ ಉಪನಿರ್ದೇಶಕರು (ಪಶುಪಾಲನೆ), ಬೃಹತ್ ಬೆಂಗಳೂರು ಮಹಾನಗರಪಾಲಿಕೆ, ಇವರು ನೀಡಿದ ಉತ್ತರಗಳನ್ನು ಇಲ್ಲಿ ಒದಗಿಸಿದ್ದೇವೆ. ಮುಖ್ಯಾಂಶಗಳು ಹೀಗಿವೆ:

ಗೋವುಗಳು ಮತ್ತು ನಾವು

ಗೋವುಗಳು, ಗೋ-ಲೋಬಲ್ ವಾರ್ಮಿಂಗ್ ಮತ್ತು ಗೋ ಸಮ್ಮೇಳನವೂ
ಡಾ| ಶ್ರೀನಿವಾಸ ಕಕ್ಕಿಲ್ಲಾಯ, ಮಂಗಳೂರು

ಗೋವುಗಳ ಮೇಲೊಂದು ‘ವಿಶ್ವ ಸಮ್ಮೇಳನವು’ ಇದೇ ಎಪ್ರಿಲ್ ೨೧ರಿಂದ ಹೊಸನಗರದಲ್ಲಿ ನಡೆಯಲಿದೆಯೆಂಬುದು ಮತ್ತು ಅದಕ್ಕಾಗಿ ಎಂಟು ಕೋಟಿ ರೂಪಾಯಿಗಳಷ್ಟು ವೆಚ್ಚವಾಗಲಿದ್ದು, ಕರ್ನಾಟಕದ ಘನ ಸರಕಾರವು ಈ ಸಲದ ಆಯವ್ಯಯಪತ್ರದಲ್ಲಿ ಇದಕ್ಕಾಗಿಯೇ ಎರಡು ಕೋಟಿ ರೂಪಾಯಿಗಳನ್ನು ಒದಗಿಸಿರುವುದು ಈಗಾಗಲೇ ಸುದ್ದಿಯಾಗಿದೆ, ಸಂಪದದಲ್ಲೂ ಈ ಬಗ್ಗೆ ಲೇಖನವಿದೆ. [http://sampada.net/event/3335]

ಉಸಿರಾಟದ ಹೊಸ ಶಿಕ್ಷಕರು

ಉಸಿರಾಟದ ಹೊಸ ಶಿಕ್ಷಕರು

ಹಲವು ವರ್ಷಗಳ ಹಿಂದೆ, ಅದೊಂದು ದಿನ, ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಒಂದು ಕಾರ್ಯಕ್ರಮವನ್ನು ವೀಕ್ಷಿಸುತ್ತಿದ್ದೆ. ಯಾವುದೋ ಚಾನೆಲ್‌ನಿಂದ ಆಂಗ್ಲ ಮಹಿಳೆಯೊಬ್ಬಳು ಕೇಸರಿ ವಸ್ತ್ರಗಳನ್ನು ಧರಿಸಿ, ಯೋಗಾಸನದಲ್ಲಿ ಕುಳಿತು, ’ಓಂ’ ಶಬ್ದದ ಮಹಿಮೆಯನ್ನು ಆಂಗ್ಲ ಭಾಷೆಯಲ್ಲಿ ಬಣ್ಣಿಸುತ್ತಿದ್ದಳು. ವೈದ್ಯನಾದ ನನಗೆ ಸಹಜವಾಗಿಯೇ ಈ ಕಾರ್ಯಕ್ರಮದಲ್ಲಿ ಆಸಕ್ತಿ ಮೂಡಿ ತದೇಕ ಚಿತ್ತದಿಂದ ವೀಕ್ಷಿಸಲಾರಂಭಿಸಿದೆ.

ಮೊಟ್ಟೆ ಮತ್ತು ಹಾಲು

ಮೊಟ್ಟೆಗಿಂತ ಹಾಲು ಶ್ರೇಷ್ಠವೇ?
ಡಾ | ಶ್ರೀನಿವಾಸ ಕಕ್ಕಿಲ್ಲಾಯ, ಮಂಗಳೂರು

Syndicate content